Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Viewing all articles
Browse latest Browse all 12761

ಅಮಿತ್ ಶಾ ಹುದ್ದೆ ಅಬಾಧಿತ : ರಾಜ್‌ನಾಥ್ ಸಿಂಗ್

$
0
0

ಎಕಾನಾಮಿಕ್ಸ್ ಟೈಮ್
ಬಿಹಾರ ಚುನಾವಣಾ ಫಲಿತಾಂಶ ಏನೇ ಆದರೂ ಅಮಿತ್ ಶಾ ಅವರೇ ಮತ್ತೆ ಪಕ್ಷಾಧ್ಯಕ್ಷರು ಎಂದು ಸಚಿವ ರಾಜ್‌ನಾಥ್ ಸಿಂಗ್ ಸ್ಪಷ್ಟಪಡಿಸಿದ್ದು, ಯಾವುದೇ ವಿಧಾನಸಭೆ ಚುನಾವಣೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಂಬಂಧ ಇಲ್ಲ . ಚುನಾವಣೆಯಲ್ಲಿ ಪಕ್ಷ ಸೋತರೂ ಗೆದ್ದರೂ ಯಾರೇ ಪಕ್ಷಾಧ್ಯಕ್ಷರಾಗಿದ್ದರೂ ಅವರು ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳಿದರು.

ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅತ್ಯಧಿಕ ಬಹುಮತ ಗಳಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲ ಹಂತಗಳಲ್ಲೂ ಸಾರ್ವಜನಿಕ ಸಭೆಗಳನ್ನು ನಡೆಸಿದ್ದು, ಉಳಿದಿರುವ ಹಂತದಲ್ಲೂ ಯೋಜಿತ ಪ್ರಚಾರ,ಸಭೆ ನಡೆಸಲಾಗುವುದು ಎಂದರು.

ಮಹಾಮೈತ್ರಿ ನಾಯಕರು ಪ್ರಚಾರದ ವೇಳೆ ಕೆಟ್ಟ ಭಾಷೆ ಬಳಸಿದ್ದು, ಚುನಾವಣಾ ಆಯೋಗವು ಪರಿಶೀಲಿಸುತ್ತಿದೆ. ನೀವೇನು ಹೇಳುತ್ತೀರಿ ಎಂಬ ಪ್ರಶ್ನೆಗೆ, ಮಹಾಮೈತ್ರಿ ನಾಯಕರು ಅದನ್ನು ಬಿಡಬೇಕು. ಸಭ್ಯತೆಯ ಎಲ್ಲೆ ಮೀರಿ ಭಾಷೆ ಬಳಕೆ ಕುರಿತಂತೆ ಆ ನಾಯಕರಿಗೆ ಎಚ್ಚರವಿರಬೇಕು ಎಂದರು. ಇದು ಬಿಜೆಪಿಯವರಿಗೆ ಅನ್ವಯಿಸುವುದೇ ಎಂದು ಕೇಳಿದಾಗ, ಇದು ಎಲ್ಲರಿಗೂ ಅನ್ವಯಿಸುವ ಸಲಹೆ. ಆದರೆ ನಮ್ಮ ಪಕ್ಷವು ಸಭ್ಯತೆಯನ್ನು ಕಾಯ್ದುಕೊಳ್ಳುವಂತೆ ನಾಯಕರಿಗೆ ತರಬೇತಿ ನೀಡಿದೆ ಎಂದು ಉತ್ತರಿಸಿದರು.

ಪ್ರಶಸ್ತಿ ವಾಪಸ್ ಬೇಡ, ಚರ್ಚೆಗೆ ಸಿದ್ಧ : ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಪ್ರಶಸ್ತಿ ವಾಪಸ್ ನೀಡುವುದು ಸಮಸ್ಯೆಗೆ ಪರಿಹಾರ ಅಲ್ಲ. ಅಂಥ ಆತಂಕ ಎದುರಿಸುತ್ತಿರುವ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳನ್ನು ಚರ್ಚೆಗೆ ಆಹ್ವಾನಿಸುತ್ತೇನೆ. ಅವರ ಆತಂಕಕ್ಕೆ ಕಾರಣವಾಗಿರುವ ವಿಚಾರಗಳು, ಘಟನೆಗಳ ಕುರಿತು ಅವರು ವಿವರಿಸಲಿ, ಪರಿಹಾರಕ್ಕೆ ಸೂಕ್ತ ಸಲಹೆಗಳನ್ನು ನೀಡಲಿ ಎಂದು ರಾಜ್‌ನಾಥ್ ಸಿಂಗ್ ಹೇಳಿದರು.

ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಸರಕಾರಗಳಿಗೆ ಸಂಬಂಧಿಸಿದ್ದು. ಈ ಮೊದಲು ಅಸ್ಸಾಂ, ಗುಜರಾತ್‌ಗಳಲ್ಲಿ ಗಲಬೆ ನಡೆದು ಅದೆಷ್ಟೋ ಜನ ಪ್ರಾಣ ಕಳೆದುಕೊಂಡಾಗ ಇವರೆಲ್ಲ ಪ್ರಶಸ್ತಿ ವಾಪಸ್ ನೀಡಿಲ್ಲ. ಈಗ ಪ್ರಶಸ್ತಿ ವಾಪಸ್ ನೀಡಬೇಕೆಂದು ಅವರಿಗೆ ಅನಿಸಿದ್ದರೆ ಅದಕ್ಕೆ ಕಾರಣವಾಗಿರಬಹುದಾದ ಎಲ್ಲ ವಿಚಾರಗಳ ಕುರಿತಂತೆ ಪ್ರಜಾಪ್ರಭುತ್ವದಲ್ಲಿ ಅವರ ಜತೆ ನಾನು ಚರ್ಚಿಸಲು ಸಿದ್ಧ ವಿದ್ದು, ಅಧಿಕೃತವಾಗಿ ಅವರನ್ನು ಆಹ್ವಾನಿಸುತ್ತಿದ್ದೇನೆ ಎಂದರು.

ದೇಶದಲ್ಲಿ ಜನರ ಆಹಾರ ಸಂಸ್ಕೃತಿ, ಧಾರ್ಮಿಕ ಆಚರಣೆಗಳ ಕುರಿತು ಯಾವುದೇ ನಿರ್ಬಂಧಗಳಿಲ್ಲ. ನಾನು ಗೃಹ ಸಚಿವನಾಗಿದ್ದು, ದೇಶದ ಆಂತರಿಕ ಭದ್ರತೆ ನನ್ನ ಜವಾಬ್ದಾರಿ. ಹೀಗಾಗಿ ಹಿಂಸಾಚಾರ, ಗಲಬೆಗಳಿಗೆ ನನ್ನನ್ನು ಗುರಿಯಾಗಿಸಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕೆ ಗುರಿ ಮಾಡಲಾಗುತ್ತಿದೆ ಎಂಬುದು ತಿಳಿಯದು ಎಂದು ಅವರು ಹೇಳಿದರು.


Viewing all articles
Browse latest Browse all 12761


<script src="https://jsc.adskeeper.com/r/s/rssing.com.1596347.js" async> </script>