Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Viewing all articles
Browse latest Browse all 12761

ಸಿಖ್ಖ್ ದಂಗೆ ಹೇಳಿಕೆ ರಾಜಕೀಯ ಪ್ರೇರಿತ

$
0
0

ಹೊಸದಿಲ್ಲಿ: ಸಹಿಷ್ಣುತಾ ಪಾಠ ಹೇಳಲು ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲವೆಂದು ಪ್ರಧಾನಿ ಮೋದಿ ಸಿಖ್ಖ್ ದಂಗೆಯನ್ನು ಉಲ್ಲೇಖಿಸಿ ಟೀಕಿಸಿದ ಬೆನ್ನಲ್ಲೇ, ಪ್ರಧಾನಿಯ ಈ ಹೇಳಿಕೆ 'ರಾಜಕೀಯ ಪ್ರೇರಿತ'ವೆಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.

'2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಕೋಮು ಗಲಭೆ ವೇಳೆ ಮೋದಿಗೆ ಅಂದಿನ ಪ್ರಧಾನಿ ವಾಜಪೇಯಿ ಏನು ಮಾಡಬೇಕೆಂದು ಹೇಳಿದ್ದನ್ನು ಮರೆತು, ಇದೀಗ 31 ವರ್ಷಗಳ ಹಳೆಯ ವಿಷಯವನ್ನು ಕೆದಕುತ್ತಿದ್ದಾರೆ. ಹತಾಶೆಯಿಂದ ಮೋದಿ ಇಂಥ ಮಾತುಗಳನ್ನಾಡುತ್ತಿದ್ದಾರೆ,' ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಹೇಳಿದ್ದಾರೆ.

'ದಿಲ್ಲಿಗೆ ಸೇನೆಯನ್ನು ಕರೆಯಿಸಿಕೊಂಡು ಕೇವಲ 72 ಗಂಟೆಗಳಲ್ಲಿ ಗಲಭೆಯನ್ನು ನಿಯಂತ್ರಿಸಲಾಗಿತ್ತು. ಆದರೆ, ಸೇನೆ ಕರೆಸುವಂಥ ಕಾರ್ಯಕ್ಕೇ ಮುಂದಾಗದ ಮೋದಿ ಮತ್ತು ತಂಡ ಗುಜರಾತ್‌ನಲ್ಲಿ ದಂಗೆ ಮತ್ತಷ್ಟು ಭುಗಲೇಳುವಂತೆ ಪ್ರೇರೇಪಿಸಿದರು,' ಎಂದು ಆರೋಪಿಸಿದರು.

'ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದನ್ನು ಒಪ್ಪಿಕೊಳ್ಳದ ಮೋದಿ ಸರಕಾರದ ಸಚಿವರು, ಬುದ್ಧಿಜೀವಿಗಳು ಹಾಗೂ ಕಲಾವಿದರ ವಿಮರ್ಶೆಯನ್ನು ಸ್ವೀಕರಿಸಲೂ ತಯಾರಿಲ್ಲ,' ಎಂದರು.

'ಈ ವರ್ಷ ನಡೆಯುತ್ತಿರುವ ಅಸಹಿಷ್ಣುತಾ ಘಟನೆಗಳಿಗೆ ಮೋದಿ ಉತ್ತರಿಸುವ ಬದಲು, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ತಮ್ಮ ತಪ್ಪನ್ನು ಮರೆಮಾಚಲು 31 ವರ್ಷದ ಹಳೆ ಘಟನೆಯನ್ನು ಕೆದಕುತ್ತಿದ್ದಾರೆ,' ಎಂದಿದ್ದಾರೆ.


Viewing all articles
Browse latest Browse all 12761


<script src="https://jsc.adskeeper.com/r/s/rssing.com.1596347.js" async> </script>